# *9 ಕೋಟಿ ಯ ಜಿ.ಎಸ್.ಟಿ. ವಂಚನೆ ಆರೋಪಿಗೆ ಜಾಮೀನು*  – Samruddiya Nele
ಅಪರಾಧ ಕಥೆವಿಶೇಷ ವರದಿ
Trending

*9 ಕೋಟಿ ಯ ಜಿ.ಎಸ್.ಟಿ. ವಂಚನೆ ಆರೋಪಿಗೆ ಜಾಮೀನು* 

9 ಕೋಟಿಯ ಜಿ.ಎಸ್.ಟಿ. ವಂಚನೆ ಮಾಡಿದ್ದಾನೆನ್ನಲಾದ ಆರೋಪಿ ರಾಹುಲ್ ತಂದೆ ಕಿಶನರಾವ್ ಕುಲಕರ್ಣಿ ಎಂಬವನಿಗೆ ಬೀದರಿನ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ.


ಬೀದರಿನ 1ನೇ ಅಧಿಕ ಸಿವಿಲ್ ಜಡ್ಜ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಧೀಶರು ಬೀದರ ಇವರು ದಿನಾಂಕ 8-9-2025 ರಂದು ಜಿ.ಎಸ್. ಟಿ. ಕ್ರೈಮ್ ಸಂಖ್ಯೆ 1/2025 ಪ್ರಕರಣದ ವಿಚಾರಣೆ ನಡರಸಿದರು. ಹಾಗೂ ವಾದಿ ಪ್ರತಿವಾದಿ ವಕೀಲರ ವಾದ ಆಲಿಸಿ ಆರೋಪಿ ಜಾಮೀನು ಪಡೆಯಲು ಅರ್ಹ ಎಂಬ ತೀರ್ಮಾನಕ್ಕೆ ಬಂದು ಕೆಲ ಶರತ್ತುಗಳ ಅನ್ವಯ ಜಾಮೀನು ಮಂಜುರು ಮಾಡಿರುತ್ತಾರೆ.

2 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ರೊಂದಿಗೆ ಜಾಮೀನು ಅರ್ಜಿ ಸ್ವೀಕರಿಸಲಾಗಿದೆ ಎಂದು ನ್ಯಾಯಮೂರ್ತಿ ದೇವಾರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.

ಆರೋಪಿ ಪರವಾಗಿ ಖ್ಯಾತ ವಕೀಲರಾದ ಶ್ರೀ ಕ್ರಿಶ್ಣಪ್ಪ ಅವರು ವಾದಿಸಿದರು ಹಾಗೂ ವಾಣಿಜ್ಯ ಇಲಾಖೆಯ ಪರವಾಗಿ ಸರಕಾರಿ ವಕೀಲರು ವಾದ ಮಂಡಿಸಿದರು.

ಆರೋಪಿ ಎರಡು ತಿಂಗಳ ತನಕ ಅಥವಾ ಚಾರ್ಜಶೀಟ್ ದಾಖಲು ಆಗುವ ವರೆಗೆ ಯಾವುದು ಮೊದಲು ಆಗುತ್ತದೋ ಅಲ್ಲಿಯವರೆಗೆ ಪ್ರತಿ ತಿಂಗಳ 15 ನೇ ದಿನಕ್ಕೆ ವಾಣಿಜ್ಯ ಇಲಾಖೆಯಲ್ಲಿ ಹಾಜರಿ ನೀಡತಕ್ಕದ್ದು. 

ಎಲ್ಲಾ ವಿಚಾರಣೆಗೆ ನ್ಯಾಯಾಲಯಕ್ಕೆ ಬರತಕ್ಕದ್ದು, ಆರೋಪಿ ಗವಾಹಗಳಿಗೆ ಬೆದರಿಸುವ ಹಾಗಿಲ್ಲ. ತನಿಖೆ ಕಾರ್ಯದಲ್ಲಿ ಸಹಕರಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜುರು ಮಾಡಿ ಆದೇಶ ಹೊರಡಿಸಲಾಗಿದೆ.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!