# ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಜಾತಿವಾದಿ ಹಲ್ಲೆ; ಸಂಬoಧಿತ ವ್ಯಕ್ತಿಗಳ ವಿರುದ್ಧ ದೇಶದ್ರೋಹಿ ಕ್ರಮ ಹಸ್ತಗತಿಗೆ ಒತ್ತಾಯ – Samruddiya Nele
ವಿಶೇಷ ವರದಿ
Trending

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಜಾತಿವಾದಿ ಹಲ್ಲೆ; ಸಂಬoಧಿತ ವ್ಯಕ್ತಿಗಳ ವಿರುದ್ಧ ದೇಶದ್ರೋಹಿ ಕ್ರಮ ಹಸ್ತಗತಿಗೆ ಒತ್ತಾಯ

ಬೀದರ: ವೀರ ಕನ್ನಡಿಗರ ಸೇನೆ ತಿಳಿಸುತ್ತದೆ: ದಿನಾಂಕ 06-10-2025 ಮತ್ತು 07-10-2025 ರಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ಘಟನೆ – ಮುಖ್ಯ ನ್ಯಾಯಮೂರ್ತಿ ಶ್ರೀ ಬಿ. ಆರ್. ಗವಾಯಿ ರವರ ಮೇಲೆ ವಕೀಲ ಕಿಶೋರ ರಾಕೇಶ್ ಜಾತಿಯ ವಿಷಪ್ರಸಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅಪಮಾನ ಮಾಡಿದದ್ದು ಅತ್ಯಂತ ಖಂಡನೀಯವಾಗಿದೆ. ಈ ಘಟನೆಗೆ ಪುಷ್ಠಿ ನೀಡಿದ ಟಿ. ಜೆ. ಮೋಹದಾಸ್ (RSS), ಕರ್ನಾಟಕದ ಭಾಸ್ಕರರಾವ್ ಮತ್ತು ಗ್ವಾಲಿಯಾರ್ ಹೈಕೋರ್ಟ್ ವಕೀಲ ಅನಿಲ್ ಮಿಶ್ರಾ – ಅವರ ವಿರುದ್ಧ ತಕ್ಷಣ ದೇಶದ್ರೋಹಿ ಪ್ರಕರಣ ದಾಖಲಿಸಿ, ಭಾರತದಿಂದ ತಡಿಪಾರು ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ.
ಸಂಘದ ಪದಾಧಿಕಾರಿಗಳು ಈ ಘಟನೆ ತೀವ್ರವಾಗಿ ಖಂಡಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ದೇಶದ ಸಂವಿಧಾನಾತ್ಮಕ ಅಂಗಳವಾಗಿದೆ ಮತ್ತು ಎಲ್ಲ ಪ್ರಜೆಗಳಿಗೆ ಸಮಾನತೆ, ಪ್ರಜಾಪ್ರಭುತ್ವ ಮತ್ತು ನ್ಯಾಯತಂತ್ರವನ್ನು ರಕ್ಷಿಸುತ್ತದೆ. ಜಾತಿ, ಧರ್ಮ, ಭಾಷೆ ಅಥವಾ ಸಾಮಾಜಿಕ ಭೇದಭಾವಗಳ ಆಧಾರದ ಮೇಲೆ ಹಲ್ಲೆ ನಡೆಯುವುದನ್ನು ಸ್ವೀಕರಿಸಲಾಗುವುದಿಲ್ಲ.
ವೀರ ಕನ್ನಡಿಗರ ಸೇನೆ ಈ ಮನವಿ ಮೂಲಕ ಎಲ್ಲಾ ಸಂಬoಧಿತ ಅಧಿಕಾರಿಗಳಿಗೆ, ಕಾನೂನು ಪಾಲಕರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದೆ. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ನಮ್ಮ ಅನಿವಾರ್ಯ ಕರ್ತವ್ಯವಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಡಾ. ಸುಬ್ಬಣ್ಣ ಕರಕನಳ್ಳಿ, ಮುಕೇಶ ಶಾಹಗಂಜ್( ಜಿಲ್ಲಾ ಅಧ್ಯಕ್ಷರು), ಬಸವರಾಜ ಜಡಗೆ(ಜಿಲ್ಲಾ ಉಪಾಧ್ಯಕ್ಷರು), ಬಾಬುರಾವ್ ಕೆ. ಬಿಟ್ಟೆ, ಅಂಬಾದಾಸ ಸೈನೆ, ಸಂದೀಪ ಚಾಂಬೋಳ, ದೇವರಾಜ ಮುಗನೂರ, ಅಮರ ಸಂವಿಕರ್, ರಾಕೇಶ್ ಬಂಗ್ಲೆ, ಭಗವಾನ್ ಯಾದವ, ಧನರಾಜ ರಾಜೋಳೆ, ಗೌತಮ ಚಿಮಕೊಡ ಉಪಸ್ಥಿತರಿದ್ದರು.
Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!